ಕಠಿಣ ಶಿಲ್ಪಪ್ರಕಾರಗಳಲ್ಲೇ ಈ ದೇವಾಲಯ ಅನನ್ಯ ಮತ್ತು ಅಮರ. ಸರಳ ಕೃತಿಗಳಲ್ಲಿ ಹುದುಗಿದ್ದ ನನ್ನ ಮನಸ್ಸಿಗೆ ಮುದನೀಡಿದ ಈ ದೇವಾಲಯದ ಶಿಲ್ಪ ಸೌಂದರ್ಯ, ನನ್ನನ್ನು ವಿಸ್ಮಯನನ್ನಾಗಿಸಿದೆ. ಹೀಗೆಂದು ಹೇಳಿದವರು ಬೇರಾರೂ ಅಲ್ಲ, ನಡೆದಾಡುವ ವಿಶ್ವಕೋಶ ಜ್ಞಾನಪೀಠ ಪ್ರಶಸ್ತಿ ವಿಜೇತರು ಆದ ಡಾ ಶಿವರಾಮ ಕಾರಂತರು ಹೇಳಿದ ಮಾತಿದು. ಹಳೇಬಿಡು - ಬೇಲೂರು ದೇವಸ್ಥಾನಗಳನ್ನು ನೋಡಿ ಡಾ. ಶಿವಕಾಮ ಕಾರಂತರು ಹೇಳಿದರೆಂದು ತಿಳಿಯಬೇಡಿ. ಅವರು ಹೇಳಿದ್ದು ದೇವಾಲಯ ಚಕ್ರವರ್ತಿಯಿಂದು ಹೊಗಳಿಸಿಕೊಂಡು, ಬೇಲೂರು-ಹೊಯ್ಸಳರ ನಾವಿನ್ಯಕ್ಕೆ ಕೊಂಡಿಯಾದ ದೇವಸ್ಥಾನವೊಂದರ ಬಗ್ಗೆ, ಅದು ಇಟಗಿಯ ಮಹದೇವ ದೇಗುಲ, ಕೇವಲ ಹಂಪೆ, ಬಾದಾಮಿ, ಬಿಜಾಪುರಗಳಷ್ಟೇ ಈ ಶಿಲ್ಪ ಕೃತಿಗಳಿಗೆ, ಐತಿಹಾಸಿಕ ಇಮಾರತ್ತುಗಳಿಗೆ ಹೆಸರಾಗಿರುವ ಪ್ರವಾಸೋದ್ಯಮ ನಿಗಮ ಸರ್ಕಾರ ಇವುಗಳಿಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಲೇ, ಅನೇಕಾನೇಕ ಶಿಲ್ಪ ಸೌಂದರ್ಯ ತಾಣಗಳನ್ನು ನಿರ್ಲಕ್ಷಿಸಿದೆ. ಹೀಗೆ ನಿರ್ಲಕ್ಷಿತ ತಾಣಗಳಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಇಟಗಿ ಗ್ರಾಮದ ದೇವಾಲಯ ಚಕ್ರವರ್ತಿ ಎಂದು ಬಿರುದಾಂಕಿತ ಮಹದೇವ ದೇಗುಲ ಪ್ರಮುಖವಾಗಿದೆ.

ಕರ್ನಾಟಕದ ಕೊಪ್ಪಳ ಜಿಲ್ಲೆಯು ಮೊದಲಿನಿಂದಲೂ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ತುಂಗಭದ್ರಾ ನದಿಯ ತೀರಕ್ಕೆ ಸಮೀಪವಾಗಿರುವ ಕೊಪ್ಪಳ ಜಿಲ್ಲೆಯು ಕೋಪಣ ನಗರವಾಗಿ ಮೆರೆದಿತ್ತು. ಇದು ಹೈದರಾಬಾದಿನ ನಿಜಾಮನ ಆಡಳಿತಕ್ಕೂ ಒಳಪಟ್ಟ ನಾಡಾಗಿತ್ತು. ಈ ಜಿಲ್ಲೆಯಲ್ಲಿ ಸಿಂಧರ ವಂಶದ ದೊರೆಗಳು ಯರಂಬರ್ಗೆ (ಯಲಬುರ್ಗಾ) ವನ್ನು ಆಳುತ್ತಿದ್ದರು. ಈ ತಾಲೂಕಿನ ಹಲವಾರು ಸ್ಥಳಗಳಲ್ಲಿ ಪುರಾಣ ಪ್ರಸಿದ್ಧ ಮತ್ತು ಐತಿಹಾಸಿಕ ಪ್ರಸಿದ್ಧ ದೇವಾಲಯಗಳನ್ನು ನಾವು ಕಾಣಬಹುದಾಗಿದೆ. ಎಲ್ಲ ದೇವಾಲಯಗಳು ಶೋಭಾಯ ಮಾನವಾಗಿವೆ. ಇವೆಲ್ಲವುಗಳಿಗಿಂತ ಇಟಗಿಯ ಮಹೇಶ್ವರ ದೇವಾಲಯವು ಅತಿ ಪ್ರಸಿದ್ಧಿಯನ್ನು ಪಡೆದಿದೆ. ಶಾಸನದಲ್ಲಿ ಈ ಗ್ರಾಮಕ್ಕೆ "ವಿಟ್ಟಿಕಾ" ಇಂದು ಕರೆಯಲಾಗಿದೆ. ಚಾಲುಕ್ಯರ ಕಾಲದಲ್ಲಿ ಈ ಗ್ರಾಮ ಒಂದು ದೊಡ್ಡ ಅಗ್ರಹಾರವಾಗಿತ್ತೆಂದೂ ತಿಳಿದು ಬರುತ್ತದೆ. ಇಂಥ ಪವಿತ್ರ ಸ್ಥಳದಲ್ಲಿಯೇ ಮಹಾದೇವ ಮಂದಿರ ನಿರ್ಮಾಣಗೊಂಡು ತನ್ನದೇ ಆದ ಇತಿಹಾಸ ವನ್ನು ರೂಪಿಸಿಕೊಂಡಿದೆ.

ದೇವಾಲಯದ_ವಿಶಿಷ್ಟ_ಲಕ್ಷಣಗಳು

ಈ ದೇವಸ್ಥಾನಕ್ಕೆ ಬಳಸಿದ ಕಲ್ಲು ಈ ಭಾಗದಲ್ಲಿ ಲಭ್ಯವಿಲ್ಲದಿದ್ದರೂ, ಮಹದೇವ ದಂಡನಾಯಕ ಶ್ರಮವಹಿಸಿ, ಕಲ್ಲುಗಳನ್ನು ಬೇರೆಡೆಯಿಂದ ತರಿಸಿರುವುದಲ್ಲದೆ ಆಗಿನ ಕಾಲದಲ್ಲಿಯೇ ಕರ್ನಾಟಕದಲ್ಲಿ ಕಲ್ಲನ್ನು ಕತ್ತರಿಸುವ, ಕೊರೆಯುವ ವಿಧ ವಿಧಾನಗಳ, ಕೈಸಲಕರಣೆಗಳ ಬಳಕೆ ಈ ದೇವಸ್ಥಾನದ ನಿರ್ಮಾಣಕ್ಕೆ ಬಳಸಲಾಗಿದೆ

ಕೃಪೆ: ರವಿ ನವಲಹಳ್ಳಿ

ಪೂರ್ವಾಭಿಮುಖವಾಗಿ ಮೈದಳೆದು, ಶ್ರೀಮಂತಿಕೆಯಿಂದ ರಾರಾಜಿಸುತ್ತಿರುವ ಈ ದೇವಸ್ಥಾನದ ಪ್ರದೇಶ ಎತ್ತರದಲ್ಲಿದೆ. ಮೊದಲಲೆ ಕೆಳಹಂತದಲ್ಲಿ 300 ಅಡಿ ಅಗಲ, ಉದ್ದದ ಪುಷ್ಕರಣೆ ಇದೆ. ಈ ಕಲ್ಯಾಣಿಯನ್ನು ದೊರೆತ ಕಲ್ಲನ್ನೇ ಸುತ್ತಲೂ ಬಳಸಿ, ಒಂದು ಕೆರೆ ರೂಪ ನೀಡಿರುವುದು ದೇವಸ್ಥಾನದ ಶೋಭೆಗೆ ಕಾರಣವಾಗಿದೆ.

ದೇವಾಲಯವನ್ನು ನಿರ್ಮಾಣ ಮಾಡುವಾಗ ಚಾಲುಕ್ಯರು ಉಸುಕು ಮಿಶ್ರಿತ ಕೆಂಪು ಕಲ್ಲನ್ನು ಹೊರತುಪಡಿಸಿ, ಕಪ್ಪು ಮಿಶ್ರಿತ ನೀಲಿ ಛಾಯೆಯ ಬಳಪದ ಕಲ್ಲಿನ ಕ್ಲೋರೆಟಿಕ್‌ ಸಿಸ್ಟ್ ಕಲ್ಲು' ಉಪಯೋಗಿಸಿ, ಗಾಢ ಹಾಗೂ ಚಕ್ರಗಳಿಂದ ಕೆತ್ತಿ ಕಂಬಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ಸೂಕ್ಷ್ಮ ಕೆತ್ತನೆಯ ಕೆಲಸವನ್ನೂ ಮಾಡಿದ್ದಾರೆ. ರತ್ನಾ ಭರಣಗಳಲ್ಲಿ ಕಂಡುಬರುವ ನಯ, ನಾಜೂಕತೆ ಯನ್ನು ಇವರು ನಿರ್ಮಿಸಿರುವ ದೇವಾಲಯಗಳ ದ್ವಾರಗಳಲ್ಲಿ ಕಾಣಬಹುದು. ದೇವಾಲಯದ ದ್ವಾರಗಳ ಅಕ್ಕಪಕ್ಕದಲ್ಲಿ ಕಲಾತ್ಮಕವಾದ ಪಟ್ಟಿಗಳು ಕಂಡುಬರುತ್ತವೆ. ಶಿಲ್ಪಿಯ ಕೈ ಚಳಕದಿಂದ ನಿರ್ಮಾಣಗೊಂಡಿರುವ ಚಿಕ್ಕ-ಚಿಕ್ಕ ಗೊಂಬೆಗಳನ್ನು ಶಿಲಾಬಾಲಿಕೆಯರ ಮೂರ್ತಿಗಳನ್ನು, ನಗಾರಿ, ಡೋಲು, ಡಮರುಗ ಮುಂತಾದವುಗಳನ್ನು ಹಿಡಿದು ನರ್ತಿಸುವ ಗೊಂಬೆಗಳನ್ನು ನಾವು ಕಾಣಬಹುದು.

ಚಾಲುಕ್ಯ ದೇವಾಲಯಗಳು ನಿರ೦ಧಾರ ಪ್ರಕಾರದವುಗಳು. ಇವುಗಳಲ್ಲಿ' ಏಕ ಕೋಟಿ ಹಾಗೂ ತ್ರಿಕುಟ' ದೇವಾಲಯಗಳು ನಿರ್ಮಾಣಗೊಂಡಿರು ಇವೆ. ಇಟಗಿಯ ಮಹಾದೇವ ಮಂದಿರವು ಬಹಳ ಕಲಾತ್ಮಕವಾಗಿದ್ದು, ನೋಡುಗರ ಮನಸ್ಸನ್ನು ಆಕರ್ಷಿಸುತ್ತದೆ. ದಂಡಾದಿಪತಿ ಮಹಾದೇವ ದಂಡ ನಾಯಕನು ಇದರ ನಿರ್ಮಾಣ ಕಾರ್ಯದ ಪ್ರಮುಖನು. ಇವನು ಶ್ರೀಮೂರ್ತಿ ನಾರಾಯಣ ಮತ್ತು ಚಂದ್ರಲೇಶ್ವರಿಯರ ಉದರದಿಂದ ಜನಿಸಿದನು. ಇವನು ಸಾಹಸಿಯೂ ಹೌದು, ಭಕ್ತಿ ಪ್ರಿಯನೂ ಹೌದು. ಮಹಾದೇವ ಮಂದಿರದ ಜೊತೆಗೆ ತಂದೆಯ ಸ್ಮರಣಾರ್ಥವಾಗಿ ಮೂರ್ತಿ ನಾರಾಯಣ ದೇವಾಲಯ ಮತ್ತು ತಾಯಿಯ ನೆನಪಿಗಾಗಿ ಚಂದಲೇಶ್ವರಿ ದೇವಾಲಯವನ್ನು ಕಟ್ಟಿಸಿದನು. ಅಲ್ಲದೆ ಸಾಹಸ ಭೈರವ ದೇವಾಲಯವನ್ನು ಇವನೇ ನಿರ್ಮಿಸಿದನು. ಎಂಟು ದಿಕ್ಕುಗಳಿಗೆ ಒಂದೊಂದು ಲಿಂಗ ಮಂಟಪ ಗಳನ್ನು ಕಟ್ಟಿಸಿ, ಅಷ್ಟ ದಿಗ್ಗಾಲಕರ ನೆನಪನ್ನು ತಂದು ಕೊಡುವ ಕೆಲಸವನ್ನು ಮಾಡಿರುತ್ತಾನೆ. ದೇವಾಲಯದ ಹಲವಾರು ಭಾಗಗಳಲ್ಲಿ ಕೋಷ್ಟಗಳನ್ನು ಕಾಣಬಹುದು. ಇವು ಬಹಳ ಸುಂದರವಾಗಿದ್ದು ಎಡ ಬಲದಲ್ಲಿ ಉತ್ತಮ. ರೀತಿಯ ಕೆತ್ತನೆಯ ಕೆಲಸದಿಂದ ಕೂಡಿದ ಗೋಪುರ ಸ್ಥ೦ಬಗಳನ್ನು ಹೊಂದಿವೆ.

ಕೃಪೆ: ರವಿ ನವಲಹಳ್ಳಿ

ದೇವಾಲಯದ_ಪರಿಚಯ

ಚಾಲುಕ್ಯ ಶೈಲಿಯ ದೇವಾಲಯವು ವಿಶೇಷ ಲಕ್ಷಣಗಳನ್ನು ಹೊ೦ದಿದೆ. ನಯವಾದ ಶ್ರೇಷ್ಠ ಗುಣಮಟ್ಟದ ಕಲ್ಲಿನಿ೦ದ ಈ ದೇವಾಲಯ ನಿರ್ಮಾಣಗೊಂಡಿದೆ. ಶಿಲೆಯ ಕೆತ್ತನೆಯ ಕೆಲಸವನ್ನು ಕಲೆಯ ಮಾಧುರ್ಯವನ್ನು ಶಿಲೆಯಲ್ಲಿ ಕೆತ್ತಿ ಉಳಿಸಿ ಹೋಗಿದ್ದಾರೆ. ಈ ದೇವಾಲಯ ತ್ರಿಕೂಟಗಳ ಮಾದರಿಯಲ್ಲಿ ನಿರ್ಮಾಣಗೊಂಡಿರುತ್ತದೆ. ಈ ದೇವಾಲಯಗಳು ಇಂದು ಐತಿಹಾಸಿಕ ಮತ್ತು ಧಾರ್ಮಿಕ ಕ್ಷೇತ್ರಗಳಾಗಿ ಪ್ರಸಿದ್ಧಿಯನ್ನು ಪಡೆದಿವೆ . ಕರ್ನಾಟಕದ ಇತಿಹಾಸದಲ್ಲಿ ಮಹೇಶ್ವರ ದೇವಾಲಯ ವಿಶಿಷ್ಟ ಸ್ಥಾನ ಪಡೆದಿದೆ.ಇದನ್ನು ನೋಡಿದ ಜನ ಕೆತ್ತನೆಯ ಕೆಲಸವನ್ನು ಮೆಚ್ಚಿ ಬರ ಗಾಗುವರು. ಮಹಾದೇವ ದೇವಾಲಯದಂತಹ ಬೇರೊಂದು ವಿಶ ದೇವಾಲಯವನ್ನು ಜಗತ್ ಸೃಷ್ಟಿಕರ್ತನಾದ ಬ್ರಹ್ಮ ನಿಗೂ ಸೃಷ್ಟಿಸಲು ಸಾಧ್ಯವಿಲ್ಲ. ಇದು ಪೂರ್ವಂ ಬ್ರಹ್ಮನ0 ನಿರ್ಮಿಸಲಗಿಯನಿದ೦ ಕರ್ಮನೇನಾದರೂ ಇಂತಹ ದೇವಾಲಯ ಕಟ್ಟಲು ಛಲ ತೊಟ್ಟರೆ ಮಂದಿರದ ಬಳಿ ಇದ್ದು ಕೆಲ ಕಾಲ ತರಬೇತಿ ಪಡೆಯ ಬೇಕಾಗುತ್ತದೆ ಎಂದು ಸೂಚ್ಯ ವಾರಿದರ್ಕಾನೆಯ ಮ್ಮಾನರ ಮಾಹೇಷ ಹೇಳಿದ್ದಾರೆ.

ಕೃಪೆ: ರವಿ ನವಲಹಳ್ಳಿ

ಈ ದೇವಾಲಯದ ಕಟ್ಟಡದಲ್ಲಿ ಶಿಲ್ಪಕಲೆಯ ಇಂದ್ರಜಾಲವೇ ಅರಳಿ ನಿಂತಿದೆ. ಗರ್ಭಗುಡಿ, ಅಂತರಾಳ, ನವರಂಗ, ಮುಖ ಮಂಟಪ, ಶುಖನಾಶಿ ಒಂದೊಂದು ಸುಂದರ, ಎಲ್ಲವೂ ಮನೋಹರ. ಯಾತ್ರಿಕ ಮನಸ್ಸನ್ನು ದೂರದಿಂದಲೇ ಸೆಳೆಯುತ್ತದೆ. ದೇವಾಲಯ 6 ಅಡಿಯ ಜಗುಲಿನ ಮೇಲೆ ನಿರ್ಮಾಣಗೊಂಡಿದೆ ಪೂರ್ವ ದಿಕ್ಕಿಗೆ ಮಹಾದ್ವಾರ ವನ್ನು ಹೊಂದಿದ್ದು, ದಕ್ಷಿಣೋತ್ತರವಾಗಿ ಒಂದೊಂದು ದ್ವಾರವನ್ನು ಹೊಂದಿರುತ್ತದೆ. ಉತ್ತರ ಮತ್ತು ದಕ್ಷಿಣ ದ್ವಾರಗಳ ಮುಂದೆ ಚಿಕ್ಕ ಚಿಕ್ಕ ಕೂಟ ಗಳು ಮನಮೋಹಕವಾಗಿರುತ್ತವೆ. ದ್ವಾರಗಳ ಎಡ ಬಲಕ್ಕೆ ದ್ವಾರ ಪೆಟ್ಟಿಕೆಗಳನ್ನು ಕೆತ್ತಲಾಗಿದೆ. ಇದರಲ್ಲಿ ಸುಳುವು, ಹೂಬಳ್ಳಿ, ಕೀರ್ತಿ ಮುಖಗಳನ್ನು ನೋಡಿ ದರೆ ಆನಂದ ಎನಿಸುತ್ತದೆ.

ಉತ್ತರ ದಿಶೆಯಲ್ಲಿ ದ್ವಾರವು ಸುಪ್ತ ಪಟ್ಟಿಕೆಗಳಿಂದ ಕೂಡಿದೆ. ಒಂದೊಂದು ಪಟ್ಟಿಕೆಯ ಕೆಳಭಾಗದಲ್ಲಿ ದ್ವಾರ ಪಾಲಕ್ಕಿರ ಮೂರ್ತಿಯನ್ನು ಕಾಣಬಹುದು. ಕೆಲವು ಪಟ್ಟಿಕೆ ಗಳಲ್ಲಿ ಸಂಗೀತ ಸಾಮಾಗ್ರಿ ಗಳನ್ನು ಹಿಡಿದು ನರ್ತಿಸುವ, ಡೋಲು, ಡಮರುಗಳನ್ನು ಹಿಡಿದು ಹೆಜ್ಜೆ ಹಾಕುವ ಶಿಲಾ ಮೂರ್ತಿಗಳನ್ನು ಕಾಣ ಬಹುದು. ಪಟ್ಟಿಕೆಯಲ್ಲಿ ಪತ್ರ ಲತೆ, ಲತಾ ಸುರಳಿಯನ್ನು ನೋಡಬಹುದು. ಈ ಎರಡೂ ದ್ವಾರದ ಮೇಲ್ಪತ್ತು ಅತೀ ಸುಂದರವಾಗಿದ್ದು, ಪದ್ಮಾಲಂಕಾರವಾಗಿ ನೋಡಗುರ ಮನಸ್ಸನ್ನು ಸೆಳೆಯುತ್ತದೆ. ಅಲ್ಲಲ್ಲಿ ಮಕರಗಳ ಬಾಯಿಂದ ಅಲಂಕಾರಗೊಂಡ ಸುರಳಿಗಳು ದ್ವಾರದ ಮೇಲಚ್ಚತ್ತು ತೋರಣ ಕಟ್ಟಿ ಕೀರ್ತಿ ಮುಖದವರೆಗೆ ಸಾಗಿದೆ. ದ್ವಾರದ ಎಡ ಬಲಭಾಗದಲ್ಲಿ ನಿರ್ಮಾಣಗೊಂಡ ಸುಖಾಸನಗಳು ಭಗ್ನಗೊಂಡಿವೆ. ಗೋಪುರದ ಉತ್ತರ ಭಾಗಕ್ಕೆ ಅಽಷ್ಠಾನದ ಮೇಲೆ ಚಿಕ್ಕ ಕೋಷ್ಠ ಇದ್ದು ಎಡ , ಬಲ ಭಾಗಗಳಲ್ಲಿ ಚಿಕ್ಕ ಕಂಭಗಳ ಮೇಲೆ ಕೋನಾಕಾರದ ಚಿಕ್ಕ ಗೋಪುರಗಳು ಸೂಕ್ಷ ಕೆತ್ತನೆಯಿಂದ ಕೂಡಿವೆ. ವೇಸರ ಶೈಲಿಯಲ್ಲಿ ನಿರ್ಮಾಣವಾದ ಈ ದೇವಾಲಯ ಹಿನಸರಿತ ಮತ್ತು ಮುನಸರಿತದಿಂದ ಕೂಡಿದೆ. ಕಪೋತ'ದ ಮೇಲ್ಬಾಗವು ನಕ್ಷಾತ್ರಾಕಾರ ವನ್ನು ಹೊಂದಿದೆ. ದೇವಸ್ಥಾನದ ಮೇಲ್ಬಾಗದಲ್ಲಿ ವಿಷ್ಣುವಿನ ಮೂರ್ತಿ ರಚಿತಗೊಂಡಿದೆ. ಗೋಪುರದ ಮೇಲ್ತುದಿಯವರೆಗೆ ನಾಲ್ಕು ಸ್ಥರಗಳಲ್ಲಿ ಚಿಕ್ಕ ಚಿಕ್ಕ ಕೋಕೋಷ್ಠಗಳು ನಿರ್ಮಾಣಗೊಂಡಿವೆ. ಪ್ರತಿ ಸ್ಥರದಲ್ಲಿ ಮಕರಗಳ ಬಾಯಿಂದ ಅಲಂಕೃತ ಲತಾಸುರುಳಿಗಳು ಕೀರ್ತಿ ಮುಖದವರೆಗೆ ಸಾಗಿದೆ. ಗೋಪುರದ ಹಿಂಭಾಗದಲ್ಲಿ ಮತ್ತೊಂದು ದೇವಕೋಷ್ಠ ಕೆತ್ತಲ್ಪಟ್ಟಿದ್ದು ಮೇಲ್ಬಾಗದಲ್ಲಿ - ಬ್ರಹ್ಮನ ಮೂರ್ತಿಯು ಕೆತ್ತಲ್ಪಟ್ಟಿದೆ. ಹಿಂಭಾಗದ ಕಪೋತದ ಮೇಲೆ ಶಿಲಾ ಬಾಲಕಿಯರ ಮೂರ್ತಿಗಳು ಕೆಲವು ಜಾಗಗಳಲ್ಲಿ ಭಗ್ನವಾಗಿದೆ. ಗೋಪುರದ ದಕ್ಷಿಣ ದಿಶೆಯಲ್ಲಿ ಕೆತ್ತನೆಗೊಂಡ ಕೋಷ್ಟದ ಮೇಲೆ ಶಿವನ ವಿಗ್ರಹವು ಕೆತ್ತನೆಯಾಗಿದೆ. ವಿಗ್ರಹವು ಕೈಯಲ್ಲಿ ತ್ರಿಶೂಲ ಮತ್ತು ಡಮರುಧಾರಿ ಯಾಗಿದೆ. ಉತ್ತರ ದಿಶೆಯ ಗೋಪುರದಂತೆ ಇದು ಸಹಿತ ಮಕರ ತೋರಣ ಕೀರ್ತಿ ಮುಖಗಳನ್ನು ಹೊಂದಿದೆ. 

ಉತ್ತರ ದಿಶೆಯಲ್ಲಿ ದ್ವಾರವು ಸುಪ್ತ ಪಟ್ಟಿಕೆಗಳಿಂದ ಕೂಡಿದೆ. ಒಂದೊಂದು ಪಟ್ಟಿಕೆಯ ಕೆಳಭಾಗದಲ್ಲಿ ದ್ವಾರ ಪಾಲಕ್ಕಿರ ಮೂರ್ತಿಯನ್ನು ಕಾಣಬಹುದು. ಕೆಲವು ಪಟ್ಟಿಕೆ ಗಳಲ್ಲಿ ಸಂಗೀತ ಸಾಮಾಗ್ರಿ ಗಳನ್ನು ಹಿಡಿದು ನರ್ತಿಸುವ, ಡೋಲು, ಡಮರುಗಳನ್ನು ಹಿಡಿದು ಹೆಜ್ಜೆ ಹಾಕುವ ಶಿಲಾ ಮೂರ್ತಿಗಳನ್ನು ಕಾಣ ಬಹುದು. ಪಟ್ಟಿಕೆಯಲ್ಲಿ ಪತ್ರ ಲತೆ, ಲತಾ ಸುರಳಿಯನ್ನು ನೋಡಬಹುದು. ಈ ಎರಡೂ ದ್ವಾರದ ಮೇಲ್ಪತ್ತು ಅತೀ ಸುಂದರವಾಗಿದ್ದು, ಪದ್ಮಾಲಂಕಾರವಾಗಿ ನೋಡಗುರ ಮನಸ್ಸನ್ನು ಸೆಳೆಯುತ್ತದೆ. ಅಲ್ಲಲ್ಲಿ ಮಕರಗಳ ಬಾಯಿಂದ ಅಲಂಕಾರಗೊಂಡ ಸುರಳಿಗಳು ದ್ವಾರದ ಮೇಲಚ್ಚತ್ತು ತೋರಣ ಕಟ್ಟಿ ಕೀರ್ತಿ ಮುಖದವರೆಗೆ ಸಾಗಿದೆ. ದ್ವಾರದ ಎಡ ಬಲಭಾಗದಲ್ಲಿ ನಿರ್ಮಾಣಗೊಂಡ ಸುಖಾಸನಗಳು ಭಗ್ನಗೊಂಡಿವೆ. ಗೋಪುರದ ಉತ್ತರ ಭಾಗಕ್ಕೆ ಅಽಷ್ಠಾನದ ಮೇಲೆ ಚಿಕ್ಕ ಕೋಷ್ಠ ಇದ್ದು ಎಡ , ಬಲ ಭಾಗಗಳಲ್ಲಿ ಚಿಕ್ಕ ಕಂಭಗಳ ಮೇಲೆ ಕೋನಾಕಾರದ ಚಿಕ್ಕ ಗೋಪುರಗಳು ಸೂಕ್ಷ ಕೆತ್ತನೆಯಿಂದ ಕೂಡಿವೆ. ವೇಸರ ಶೈಲಿಯಲ್ಲಿ ನಿರ್ಮಾಣವಾದ ಈ ದೇವಾಲಯ ಹಿನಸರಿತ ಮತ್ತು ಮುನಸರಿತದಿಂದ ಕೂಡಿದೆ. ಕಪೋತ'ದ ಮೇಲ್ಬಾಗವು ನಕ್ಷಾತ್ರಾಕಾರ ವನ್ನು ಹೊಂದಿದೆ. ದೇವಸ್ಥಾನದ ಮೇಲ್ಬಾಗದಲ್ಲಿ ವಿಷ್ಣುವಿನ ಮೂರ್ತಿ ರಚಿತಗೊಂಡಿದೆ. ಗೋಪುರದ ಮೇಲ್ತುದಿಯವರೆಗೆ ನಾಲ್ಕು ಸ್ಥರಗಳಲ್ಲಿ ಚಿಕ್ಕ ಚಿಕ್ಕ ಕೋಕೋಷ್ಠಗಳು ನಿರ್ಮಾಣಗೊಂಡಿವೆ. ಪ್ರತಿ ಸ್ಥರದಲ್ಲಿ ಮಕರಗಳ ಬಾಯಿಂದ ಅಲಂಕೃತ ಲತಾಸುರುಳಿಗಳು ಕೀರ್ತಿ ಮುಖದವರೆಗೆ ಸಾಗಿದೆ. ಗೋಪುರದ ಹಿಂಭಾಗದಲ್ಲಿ ಮತ್ತೊಂದು ದೇವಕೋಷ್ಠ ಕೆತ್ತಲ್ಪಟ್ಟಿದ್ದು ಮೇಲ್ಬಾಗದಲ್ಲಿ - ಬ್ರಹ್ಮನ ಮೂರ್ತಿಯು ಕೆತ್ತಲ್ಪಟ್ಟಿದೆ. ಹಿಂಭಾಗದ ಕಪೋತದ ಮೇಲೆ ಶಿಲಾ ಬಾಲಕಿಯರ ಮೂರ್ತಿಗಳು ಕೆಲವು ಜಾಗಗಳಲ್ಲಿ ಭಗ್ನವಾಗಿದೆ. ಗೋಪುರದ ದಕ್ಷಿಣ ದಿಶೆಯಲ್ಲಿ ಕೆತ್ತನೆಗೊಂಡ ಕೋಷ್ಟದ ಮೇಲೆ ಶಿವನ ವಿಗ್ರಹವು ಕೆತ್ತನೆಯಾಗಿದೆ. ವಿಗ್ರಹವು ಕೈಯಲ್ಲಿ ತ್ರಿಶೂಲ ಮತ್ತು ಡಮರುಧಾರಿ ಯಾಗಿದೆ. ಉತ್ತರ ದಿಶೆಯ ಗೋಪುರದಂತೆ ಇದು ಸಹಿತ ಮಕರ ತೋರಣ ಕೀರ್ತಿ ಮುಖಗಳನ್ನು ಹೊಂದಿದೆ.

ದಕ್ಷಿಣದ್ವಾರವು ಸಹ ಸಪ್ತ ಪಟಿಕೆಗಲಿಂದ ಅಲಂಕೃತವಾಗಿದೆ. ವಿವಿಧ ಭಾವ ಭಂಗಿಗಳಲ್ಲಿ ನರ್ತಿಸುವ ಕ ವ ಹೆಣ್ಣು ಗೊಂಬೆಗಳು, ನಂದಿ, ಅಶ್ವಸಿಂಹದ ಮೂರ್ತಿಗಳು ಕೆತ್ತಲ್ಪಟ್ಟಿವೆ. ಇವುಗಳ ಸುತ್ತಲೂ ಲತಾ ಸುರಳಿ ಕೆತ್ತಲಾಗಿದೆ. ಪೂರ್ವ ದಿಶೆಯಲ್ಲಿ ರಚಿತವಾದ ದ್ವಾರವು ನವಪಟ್ಟಿಕೆಗಳಿಂದ ಕೂಡಿದೆ. ಅಶ್ವ, ನಂದಿ, ಗಜ, ಸಿಂಹದ ಮೂರ್ತಿಗಳು, ನಾಗ-ನಾಗಿಣಿಯರ, ಯಕ್ಷ-ಯಕ್ಷಿಣಿಯರ ಮೂರ್ತಿಗಳನ್ನು ಬಹು ಸುಂದರವಾಗಿ ಕೆತ್ತಲಾಗಿದೆ. ದ್ವಾರದ ಮೇಲ್ಬಾಗ ದಲ್ಲಿ ಗಜಲಕ್ಷ್ಮಿಯ ಮೂರ್ತಿ ಖಂಡರ್ಷವಾಗಿರುತ್ತದೆ. ಇದೇ ದ್ವಾರದ ಎಡಭಾಗದ ಉತ್ತರ ದಿಕ್ಕಿನಲ್ಲಿ ಕಪೋತದ ಅಂಚಿನಲ್ಲಿ ಚಿಕ್ಕ ಕೋಷ್ಟದ ಮೇಲೆ' ಸಾಹಸ ಭೈರವನ ಮೂರ್ತಿ ರಚನೆಯಾಗಿದೆ. ಇವನ ಕೈಯಲ್ಲಿ ತ್ರಿಶೂಲ, ಪರಶು, ನಡಕ್ಕೆ ನಡಪಟ್ಟಿಯನ್ನು ಕಟ್ಟಿದೆ. ಮೊಣಕಾಲವರೆಗೆ ಪೋಷಾಕವನ್ನು ಧರಿಸಿ ತಲೆಯಲ್ಲಿ ಮುಂಡಾಸ ಧರಿಸಿದೆ. ಕೊರಳಿಗೆ ತೆಲೆಯನ್ನು ಹಾಕಿಕೊಂಡಿ ಮೂರ್ತಿಯು ಅತೀ ಸುಂದರವಾಗಿದೆ. ದೇವಾಲಯದ ಮಹಾ ದ್ವಾರವನ್ನು ದಾಟಿ ಮುಂದೆ ಬಂದರೆ ರಂಜಸಜ್ಜಿಕೆ ಇದೆ. ಇದಕ್ಕೆ ಚತುಷ್ಕ ಎಂದು ಕರೆಯುವರು. ಇದರ ಈಶಾನ್ಯ ದಿಕ್ಕಿನಲ್ಲಿರುವಾ ದ್ವಾರವನ್ನು ದಾಟಿ ಮುಂದೆ ಬಂದರೆ ಬೋದಿನ ಮೇಲೆ ಮಹಾದೇವ ದಂಡ ನಾಯಕನ ಕಂಡಕ ಮೂರ್ತಿಯನ ಕಾಣಬಹುದಾಗಿದೆ. ಚತುಷ್ಯದಲ್ಲಿ ರಚಿತವಾದ ಕಂಬಗಳ ಕೆಳಭಾಗದ ದ್ವಾರ ಪಾಲಿಕೆಯರ ಮೂರ್ತಿಗಳು ಪ್ರೇಕ್ಷಕರ ಮನಸ್ಸನ್ನು ಸೆಳೆಯುತ್ತವೆ. ದೇವಾಲಯದ ಗೋಪುರದ ಮೇಲ್ತುದಿ ಶಿಲಾರಹಿತವಾಗಿ ರಚನೆಯಾಗಿದೆ. ಇದರ ನಿರ್ಮಾಣ ಕಾರ್ಯವನ್ನು ಇತ್ತೀಚಿನ ಕಾಲದಲ್ಲಿ ಹೈದರಾಬಾದ್‌ನ ನಿಜಾಮನು ವ್ಯವಸ್ಥೆಗೊಳಿಸಿದ ನೆಂದು ತಿಳಿಯುತ್ತದೆ ಗೋಪುರದ ಮೇಲ್ತುದಿಗೆ ದೊಡ್ಡ ಕಳಸವಿದೆ.

ಮಹಾದೇವ ಮಂದಿರದ ಗರ್ಭಗುಡಿಯ ವಿವಿಧ ಭಾಗದಲ್ಲಿ ಕಲಾತ್ಮಕವಾದ ಚಿಕ್ಕ ಕೋಷ್ಟಗಳು ರಚಿತವಾಗಿದ್ದು, ನೋಡಲು ಆಕರ್ಷಣೀಯವಾಗಿದೆ. ಇವು ಚಿಕ್ಕ ಮಂದಿರಗಳಂತೆ ಕಾಣುತ್ತಿದ್ದು, ಕೋಷ್ಠದ ಮೇಲ್ಬಾಗದಲ್ಲಿ ಗಜಲಕ್ಷ್ಮಿ, ಸಂಪತ್ತು ಲಕ್ಷ್ಮಿ, ಧನಲಕ್ಷ್ಮಿ ಇನ್ನೂ ಹಲವಾರು ದೇವತೆಯ ಚಿತ್ರವನ್ನು ಕಾಣಬಹುದು. ಇದೇ ರೀತಿ ಕೋಷ್ಟದ ಎರಡೂ ಮಗ್ಗಲಿನ ಭಾಗವು ಬಳ್ಳಿ ಮತ್ತು ತೋರಣಗಳಿಂದ ಅಲಂಕೃತಗೊಂಡಿದೆ. ದೇವಾಲಯದ ದಕ್ಷಿಣ ದಿಕ್ಕಿನಲ್ಲಿ ಶ್ರೀ ಸರಸ್ವತಿ ಮಠ ಇರುತ್ತದೆ. ಈ ಸರಸ್ವತಿ ಮಠದಲ್ಲಿರುವ 93 ಸಾಲುಗಳುಳ್ಳ ಶಾಸನವು ಕಲ್ಯಾಣ ಚಾಲುಕ್ಯರ ವರ್ಣನೆಯನ್ನು ಮಾಡುತ್ತದೆ. ಇದೇ ಸ್ಥಳದಲ್ಲಿ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಎರಡು ಗುಹೆಗಳಿದ್ದು, ಸುಮಾರು 40 ರಿಂದ 50 ಜನರು ಕೂಡುವಷ್ಟು

ಅವಕಾಶವನ್ನು ಹೊಂದಿವೆ. 

ಶಾಸನದ ಶಿಲೆ 8ಫೂಟ್, 10 ಇಂಚು ಎತ್ತರವಿದೆ. ಶಾಸನವನ್ನು ಬರೆದ ಅಗಲ 5ಫೂಟ್ ಆಗಿರುತ್ತದೆ. ಶಾಸನದ ಬಳಕೆ 6ಫೂಟ್, 8 ಇಂಚು ಆಗಿರುತ್ತದೆ. ಈ ಶಾಸನ ಉತ್ತಮ ರಕ್ಷಣೆಯಲ್ಲಿ ಇದೆ ಶಾಸನ ಸಾಲು 76ತರಲ್ಲಿ ಚಾಲುಕ್ಯ ರಾಜನ ಅವದಿಯಲ್ಲಿಯೇ ರಾಜ್ಯಾಡಳಿತದ ಮತ್ತು ದೇವಾಲಯಗಳ ನಿರ್ಮಾಣ ಕಾರ್ಯದ ಸ್ಥಿತಿ-ಗತಿಗಳ ಬಗ್ಗೆ ಈ ರೀತಿ ವರ್ಣನೆ ಮಾಡುತ್ತದೆ.

“ಶಾ.ಸಾ. 76।। ಶ್ರೀಮನ ಮಹಾ ಅಗ್ರಹಾರ ವಿಟ್ಟಿಗೆಗೆಯಗಿದೆ ಆಥೇಯ ಪ್ರಮುಖದ ಶ್ರೇಷ್ಟ ಮಹಾ ಜನರು ನಾಲ್ಕೂವರ್ ಕೈಯಲು ದ್ರವ್ಯ, ಧಾನ್ಯ, ಪೂರ್ವದಿಂ ಸಾರ್ವನ ವಸರ್ವ ಭಾದಾ ಪರಿಹಾರವಾಗಿ ಪಡೆದು ಶ್ರೀಮತ್ ಚಾಲುಕ್ಯ ವರ್ಷ 37ನೇಯ ನಂದನ ಸಂವತ್ಸರದ ಭಾದ್ರ ಪದ ಪೂರ್ಣಿಮೆ ಆದಿತ್ಯವಾರ ಸೋಮ ಗ್ರಹಣ ಸಂಕ್ರಾಂತಿ ವ್ಯತಿ ಪಾತದಂದು"

ಶಾ.ಸಾ .77।। ಶ್ರೀಮಾನ್ ಮಹಾದೇವೇಶ್ವರ ದೇವರ ಅಂಗಭೋಗ ನೈವೇದ್ಯ ಅನ್ನದಾನ, ಭಕ್ತವೃತ್ತಿ, ಫಣಿಯಾರ, ಧಾತ್ರ ನಾವುಗಳ ಪ ದೋರಿಗ್ರಹಕ್ಕೆ ಧಾರಾಪೂರ್ವಕವಾಗಿಬಿಟ್ಟ. "ಇದರ ಶುದ್ಧ ಭಾಷೆ, ಅಲಂಕಾರಿಕ ಶೈಲಿ ಹಾಗೂ ರಮ್ಯ ವರ್ಣನೆಯ ಚಿತ್ರ ಇರುವುದರಿಂದ ಈ ಶಾಸನವನ್ನು ಒಂದು ಚಿಕ್ಕ ಖಂಡ ಕಾವ್ಯವೆಂದೆಣಿಸ ಬಹುದು. ಬೆಳ್ಳಲ ನಾಡಿನ ಇಟಗಿಯ ವರ್ಣನೆ ವಿಕ್ರಮಾದಿತ್ಯನನ ಪರಾಕ್ರಮ, ದೇವಾಲಯದ ವರ್ಣನೆ, ಹೆಸರಾಂತ ಕವಿಗಳ ಕವಿಶ್ವ ಪ್ರೌಢಿಮೆ ಕಂಡುಬರುತ್ತದೆ.

ಕೃಪೆ: ರವಿ ನವಲಹಳ್ಳಿ

ಮಹಾದೇವ ಮಂದಿರದ ಪೂರ್ವ ದಿಕ್ಕಿಗೆ ಮುಖಮಂಟಪ ಶೋಭಿಸುತ್ತದೆ. ಈ ಮುಖಮಂಟಪಕ್ಕೆ ಹಲವಾರು ಕಂಬಗಳು ಆಧಾರವಾಗಿರುತ್ತವೆ. ಒಟ್ಟು 42 ಕಂಭಗಳು ಮುಖ ಮಂಟಪವನ್ನು ಎತ್ತಿ ಹಿಡಿದಿದ್ದವೆ ಮಂದಿರದ ಮುಖ ಮಂಟಪವನ್ನು ಪ್ರವೇಶಿಸಿ ಮೇಲ್ಕತ್ತನ್ನು ನೋಡಿದಾಗ ನಟರಾಜಾನವಾಗಿ ಕಂಗೊಳಿಸುತ್ತದೆ. ಈ ಮೂರ್ತಿಯ ಕೆಲಭಾಗ ಭಿನ್ನಗೊಂಡಿದ್ದು,ಭಂಗಿಗಳ ಮೂರ್ತಿಗಳು ಸುತ್ತಲೂ ವಿವಿಧ ಭಾಗ ಭಂಗಿಗಳ ಮೂರ್ತಿಗಳ ಕಂಡುಬರುತ್ತವೆ ಮಹದೇವ ದಂಡನಾಯಕನ ವಂಶಾವಳಿಯು ಇಲ್ಲಿ ದೊರೆಯುತ್ತದೆ. ತದನಂತರ ಮುಂದೆಸಾಗಿದರೆ,

ದೇವಸ್ಥಾನದ ಎದುರಿಗೆ ನಂದಿ ವಿಗ್ರಹವು ಮಹೇಶ್ವರನ ಎದುರಿಗೆ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಪವಡಿಸಿರುತ್ತದೆ. ನಂದಿ ವಿಗ್ರಹವು ಬಳಪದ ಕಲ್ಲಿನಿಂದ ನಿರ್ಮಾಣಗೊಂಡಿದ್ದು, ಆದರ ಕೆಲವು ಭಾಗ ಭಗ್ನವಾಗಿರುತ್ತದೆ. ಕೊರಳಿಗೆ ಗೆಜ್ಜೆಸರ, ಹಣೆಗೆ ಹಣೆಕಟ್ಟು, ಮಣಿಹಾರ ಮತ್ತು ಇಣಿಯಾ ಹಿಂಭಾಗದಲ್ಲಿ ಗುಮರೆ ಸರಗಳಿಂದ. ಶೃಂಗಾರಮಯವಾಗಿದೆ. ಇದೇ ನಂದಿ ವಿಗ್ರಹದ ಸುತ್ತಲೂ ಆವೃತ್ತಗೊಂಡ ಕಂಭಗಳು, ಚಕ್ರಕಂಭಗಳು ಮತ್ತು ದುಂದುಕಂಭಗಳು ತಳದಿಂದ ಮೇಲ್ತುದಿಯವರೆಗೆ ಚಕ್ರಾಕಾರವಾಗಿರುತ್ತವೆ. ಇವುಗಳ ತಳಭಾಗದ ನಾಲ್ಕೂಕಡೆಗೂ ಸೌಂದರ್ಯಮಯ ಶಿಲಾಬಾಲಿಕೆಯರ ವಿಷ್ಣುವಿನ ಶಿವನ ಶಿಲಾಮೂರ್ತಿಗಳು ಕಾಣುತ್ತವೆ. ಬೆಳ್ಳಿ ಬಂಗಾರದಿಂದ ಆಭರಣ ತಯಾರಿಸುವ ಮಾದರಿ ಯಲ್ಲಿ ರಚಿಸಲಾದ ಕಂಭಗಳಲ್ಲಿ ಕುಸುರಿನ ಕೆಲಸ ನೋಡಗುರ ಮನವನ್ನು ಸೆಳೆಯುತ್ತದೆ.

ಈ ಚಕ್ರಗಂಭದ ಚಿತ್ರವನ್ನು ನೋಡಿದರೆ ಮನ ಅರಳಿ ಹೂವಾಗುತ್ತದೆ. ಇಲ್ಲಿ ಶಿಲ್ಪ ಕಲ್ಲನ್ನು ಮೇಣದಂತೆ ಬಳಸಿ ತನ್ನ ಕೈಚಳಕವನ್ನು ತೋರಿಸಿ ಗುಡಿಯ ಸೌಂದರ್ಯಕ್ಕೆ ಕಾರಣ ಪುರುಷನಾಗಿದ್ದಾನೆ. ದುಂಡುಗಂಭಗಳ-ಮಧ್ಯಭಾಗದಲ್ಲಿ ಬೆಳ್ಳಿಯ ಗೆಜ್ಜೆಪಟ್ಟಿಯ ಆಕಾರದಲ್ಲಿ ಸುತ್ತಲೂ ಕೆತ್ತನೆಯ ಕೆಲಸ ಮಾಡಿ, ಕಲೆಯ ಸಿರಿಯನ್ನೇ ಭೂಮಿಗೆ ತಂದು ಮಂದಿರದ ಮೆರಗನ್ನು ಹೆಚ್ಚಿಸಿರುತಾನೆ. 

ಕೃಪೆ: ರವಿ ನವಲಹಳ್ಳಿ

ಮಹಾದ್ವಾರವನ್ನು ದಾಟಿ ಮುಂದೆ ಸಾಗಿದಾಗ ಯಾತ್ರಿಕರಿಗೆ ನವರಂಗದ ದರ್ಶನ ವಾಗುತ್ತದೆ. ನವರಂಗದ ಸುತ್ತಲೂ ನಾಲ್ಕು ದುಂಡು ಗಂಭಗಳು ಶಿಲ್ಪಕಲೆಯ ಚಾತುರ್ಯತೆಯಿಂದ ನಿರ್ಮಾಣ ಗೊಂಡಿದೆ. ಈ ಕಂಭಗಳ ಕೆಳಭಾಗದಲ್ಲಿಯೂ ವಿಷ್ಣುವಿನ ಹಾಗೂ ಶಿಲಾಬಾಲಕಿಯರ ಮೂರ್ತಿಗಳು ಕಂಗೊಳಿಸುತವೆ. ಇವು ತೀಡಿ ಮಾಡಿದ ಗೊಂಬೆಗಳು, ಹೂಬಳ್ಳಿಗಳುಮತ್ತು ತಾಳ ಮದ್ದಲೆಯೊಂದಿಗೆ ಕುಣಿಯುವ ಚಿತ್ರಗಳನ್ನು ಕಂಡಾಗ ನಮಗೂ ಕುಣಿಯ ಬೇಕೆಂದೆನಿಸುತ್ತದೆ. ಈ ಸ್ತಂಭಗಳು ಎರಡಡಿಗಿಂತಲೂ ಚಿಕ್ಕ ದಾದ ಚೌಕಾಕಾರದ ಪೀಠದ ಮೇಲೆ ನಿಂತಿವೆ. ಈ ಕಂಭಗಳಲ್ಲಿಯೂ ಮಣಿಹಾರ, ಪತ್ರ ಲತೆ, ಲತಾ ಸುರಳಿಗಳನ್ನು ಕಾಣಬಹುದು. ಇವುಗಳು ಮೀರಿ ಮೀರಿ ಹೊಳೆಯುತ್ತಿದ್ದು ಅತ್ಯಂತ ನುಣುಪಾಗಿದೆ.

ನವರಂಗದ ಮಧ್ಯೆನಿಂತು ಕತ್ತೆತ್ತಿ ದೃಷ್ಟಿಯನ್ನು ಹರಿಸಿದಾಗ, ಎರಡೇ ಎರಡು ಸ್ತಂಭಗಳ ಮೇಲೆ ಒಂದು ಏಕ ಶಿಲೆಯು ಅಲಂಕಾರಿಕ ಚಿತ್ರಗಳಿಂದ ರೂಪಗೊಂಡಿದೆ. ಇಲ್ಲಿ ಬ್ರಹ್ಮ, ವಿಷ್ಣು, ಶಿವನ ಮೂರ್ತಿಗಳನ್ನು ಕಾಣುತ್ತೇವೆ. ಇದಕ್ಕೆ "ಮಕರ ತೋರಣ" ಎಂದು ಹೆಸರು. ಇದರಲ್ಲಿ ಗಜ ಚಿತ್ರ ವಿವಿಧ ಉಡುಗೊರೆಗಳನ್ನು ತೊಟ್ಟು ಕುಣಿಯುವ ಕಟಿಬಂಧ, ಉದರ ಬಂಧ, ಕರಣ ಕುಂಡಲ ಕಾಲ್ಗಡಗಗಳನ್ನು ಧರಿಸಿದ ಚಿತ್ರಗಳು ಕೆತ್ತಲ್ಪಟ್ಟಿವೆ.

ಈ ಮಕರ ತೋರಣವನು ದಾಟಿ ಮುಂದೆಸಾಗಿದರೆ ಗರ್ಭಗುಡಿಯಿದೆ. ಆದರೆ ಮಹಾದ್ವಾರವು ಅಲಂಕಾರಿಕ ಚಿತ್ರಗಳ ಜಾಲಂದರ, ಪಟ್ಟಿಕೆಗಳನ್ನು ಹೊಂದಿದೆ. ಈ ದ್ವಾರ ಕುಸುರಿನ ಪಂಚ ಪಟ್ಟಿಕೆಗಳನ್ನು ಹೊಂದಿದ್ದು, ಸುಮಾರು ಪಟ್ಟಿಕೆಗಳು 4-5 ಇಂಚು ಅಗಲವಾಗಿವೆ. ಇದರಲ್ಲಿ ನೃತ್ಯ ಹಾಗೂ ಸಂಗೀತ ಮೇಳಗಳು, ತಾಳ ತಮ್ಮಟಿ ಮದ್ದಲಿಯನ್ನು ಹಿಡಿದು ಕುಣಿಯುವ ಸಂಸ್ಕೃತಿಯ ಪರಂಪರೆಯ ಚಿತ್ರಗಳು, ಆರತಿ ಪಡಿಯಚ್ಚಿನಲ್ಲಿ ಕೆತ್ತಿದಂತೆ ಸುಂದರವಾಗಿ ಕೆತ್ತಲ್ಪಟ್ಟಿದೆ. ಹೊಸ್ತಿಲದ ತಮ್ಮಟ, ಎಡಬದಿಯಲ್ಲಿ ಶಂಖ ಮತ್ತು ಚಕ್ರಗಳ ಚಿತ್ರಗಳನ್ನು ಕೆತ್ತಲಾಗಿದೆ. ಮುಂದೆ ಕಣ್ಣರಳಿಸಿ ನೋಡಿದರೆ ಮಹೇಶ್ವರನ ಮೂರ್ತಿ ಕಂಗೊಳಿಸುತ್ತದೆ. ಮೂರ್ತಯ ಎದುರು ಚಿಕ್ಕದಾದ ನಂದಿ ಪವಡಿಸಿದೆ.

ಮಹಾದೇವ ದಂಡನಾಯಕನು ಮಹಾದೇವ ಮಂದಿರದ ಉತ್ತರ ದಿಸೆಯಲ್ಲಿ ತಂದೆಯ ಸ್ಮರಣಾರ್ಥವಾಗಿ 'ಮೂರ್ತಿ ನಾರಾಯಣ'ಮತ್ತು ತಾಯಿ 'ಚಂದಲೇಶ್ವರಿ'ಯರ ಸ್ಮರಣಾರ್ಥವಾಗಿ ಚಂದಲೇಶ್ವರಿ ದೇವಾಲಯವನ್ನು ನಿರ್ಮಾಣ ಗೊಳಿಸಿದ್ದಾನೆ. ಅವುಗಳ ಮುಂಭಾಗದಲ್ಲಿ ಸಾಹಸ ಭೈರವ ದೇವಾಲಯವನ್ನು ಕಟ್ಟಿಸಿದ್ದಾನೆ. ಅದರ ಜೀರ್ಣೋದ್ಧಾರ ಕೆಲಸ ನಡೆಯಬೇಕಾಗಿದೆ. ದೇವಾಲಯದ ಹಲವಾರು ಕಡೆ ಲಿಂಗ ಮಂಟಪಗಳಿದ್ದು, ಆನ್ನೇಯ ದಿಕ್ಕಿನನಲ್ಲಿ ಬಹಳಷ್ಟು ಭಗ್ನಗೊಂಡ ಒಂದು ಉತ್ತಮ ರಂಗ ಸಜ್ಜಿಕೆಯಿಂದ ನಿರ್ಮಾಣಗೊಂಡ ಕಟ್ಟಡವಿದೆ. ಪ್ರಾಚ್ಯವಸ್ತು ಇಲಾಖೆಯವರು ಇದನ್ನು ' ಡ್ಯಾನ್ಸಿಂಗ್ ಹಾಲ್ ' (ನೃತ್ಯ ಶಾಲೆ) ಎಂದು ಗುರುತಿಸಿದ್ದಾರೆ. ಇದು ವಿಶಾಲವಾಗಿದ್ದು, ಕಟ್ಟಡದ ಮೇಲಿನ ಚತ್ತು ಸ್ವಲ್ಪ ಬಿದ್ದು ಹೋಗಿದೆ. ರಾಜಾಶ್ರಯ ಪಡೆದ ನರ್ತಕಿಯರು ಇಲ್ಲಿ ನೃತ್ಯದ ಪ್ರದರ್ಶನವನ್ನು ಮಾಡುತ್ತಿದ್ದರೆಂದು ತಿಳಿದು ಬರುತ್ತದೆ. ದೇವಾಲಯದ ಪಶ್ಚಿಮ ದಿಕ್ಕಿನಲ್ಲಿ ಜಲಭರರಿತ ಕಿಲ್ಗೊಂಡ ' ಎಂಬ ಹೆಸರು ಪಡೆದ ಭಾವಿ ನಿರ್ಮಾಣಗೊಂಡಿದೆ ₹. ಈ ಕಿಲ್ಗೊಂಡದಿಂದಲೇ ಮಹೇಶ್ವರ ಅರ್ಚನೆಯ ಸಲುವಾಗಿ ಪೂರೈಕೆಯಾಗುತ್ತಿತ್ತೆಂದು ತಿಳಿಯುತ್ತದೆ. ಭೀಕರ ಬರಗಾಲದಲ್ಲಿಯೂ ಬತ್ತದಂಥ ಈ ಬಾವಿಯಲ್ಲಿ ಜಲವು ಧಾರಾಳವಾಗಿ ತುಂಬಿ ಹರಿಯುತ್ತಿತ್ತೆಂದು ತಿಳಿದಿದೆ. ಇಂದಿಗೂ ಇದು ಬತ್ತಿರುವುದಿಲ್ಲ. ಇದರ ತಳ ವಿನ್ಯಾಸ ತೊಟ್ಟಿಲಿನಂತೆ ಇದ್ದು, ಗೋಪುರದ ತುದಿಯ ಸುತ್ತಳತೆಯ ಸಮನಾಗಿದೆ. 

ಕೃಪೆ: ರವಿ ನವಲಹಳ್ಳಿ

ಮಂದಿರದ ಮುಂಭಾಗಕ್ಕೆ ನೀರಿನ ರಾಶಿಯನ್ನೇ ಹೊತ್ತಿರುವ 10-12 ಫರ್ಲಾಂಗ್ ಉದ್ದದ ' ಶಿವತೀರ್ಥ' ಅಥವಾ ಪುಷ್ಕರಣೆ ಇದೆ. ದೇವಗಂಗೆ ನಿರಂತರವಾಗಿ ಹರಿದು ಇಲ್ಲಿ ನೆಲೆಸಿದಳಂತೆ. ಮೋಡಗಳು ಈ ಪುಷ್ಕರಣಿಯ ಮೇಲ್ಬಾಗದಲ್ಲಿ ಬಂದು ನಿಂತು ನೀರನ್ನು ಸುರಿದು ಹರ್ಷೋದ್ದಾರ ಉಂಟು ಮಾಡುತ್ತಿದ್ದವೆಂದು ಶಾಸನದ ಸಾಲುಗಳು ಹೇಳುತ್ತವೆ. ಈ ಬೇಳ್ವಲದ ಫಲವತ್ತಾದ ಭೂಮಿ ಸುತ್ತ ಮುತ್ತ ತೋಟ ಪಟ್ಟಿಗಳಿಂದ ನಗರದ ಶೋಭೆಯನ್ನು ಹೆಚ್ಚಿಸಿ, ಪ್ರಕೃತಿಯ ಫಲವೃತ್ತವಾಗಿತ್ತು. ಆಕರ್ಷಿತನಾದ ದೇವೇಂದ್ರನು ಇಲ್ಲಿಯ ನಂದನವನಗಳಿಂದ ಅಗಿಗಳನ್ನು ತರಿಸಿ, ಅಮರಾವತಿಯ ತನ್ನ ಉಪವನದಲ್ಲಿ ನೆಡುವ ಆಸೆ ತಳೆದಿದ್ದನಂತೆ ಎಂದು ವರ್ಣಿಸುವ ಮಾತು ಶಾಸನ ಸಾಲಿನಲ್ಲಿ ಬರುತ್ತದೆ. ಕವಿ ಒಂದು ಕಡೆ ಈ ರೀತಿಯಾಗಿ ವರ್ಣಿಸಿ ಆನಂದಿಸುತ್ತಾನೆ. ಅದೇ ನೆಂದರೆ "ದೇವಾಲಯದ ಕಲೆಯು ತಲೆಯೊಡೆದು ನಾಡಿನ ದಿಗಂತಗಳಲ್ಲಿ ಹರಿದು ಜನಮನಗಳನ್ನು ಸ್ಪರ್ಶಿಸಿ ಆನಂದವನ್ನುಂಟು ಮಾಡಿದರೆ ದೇವಾಲಯ ಕೆತ್ತಿದ ವಿಲ್ಪಿಯ ಆತ್ಮಕ್ಕೆ ಶಾಂತಿ ಸಿಗುತ್ತದೆ" .ಚಿರಶಾಂತಿಯು ನಿನ್ನ ಆತ್ಮಕ್ಕೆ ಓ ಕಲೆಗಾರ ಬರಿ ಶಿಲೆಯಲ್ಲ ಇದು ವಿಟಿಕೆಯು ಕಲೆಯ E ಆಗರ ನೋಡಾ ಕೈ ಮಾಡಿ ಕರೆಯುತಿದೆ ನಿನ್ನನು ಸ್ಪಂದಿಸಲೆಂದು ನನ್ನ ವೀಕ್ಷಿಸಿ ನೀನು ಆನಂದಿಸು ಎಂದು". ಈ ಕವಿ ವಾಣಿಯಂತೆ ದೇವಾಲಯದಲ್ಲಿ ರೂಪುಗೊಂಡಿರುವ ಶಿಲಾಮೂರ್ತಿಗಳು ದೇಶ - ವಿದೇಶಗಳಿಂದ ಜನರನ್ನು ಆಕರ್ಷಿಸಿ ಪ್ರದರ್ಶನಗೊಳ್ಳುತ್ತಲಿವೆ. ಜಗತ್ತಿನ ನಾನಾ ಮೂಲೆಗಳಿಂದ ಜನರು ಬಂದು ದೇವಾಲಯವನ್ನು ಕಂಡು ಕಲಾತ್ಮಕ ಹಾಗೂ ಕುಸುರಿನ ಶಿಲ್ಪಕಲೆಯನ್ನು ಕಂಡು ಆನಂದಿಸಿ, ನಕ್ಕು ನಲಿದು, ಹಾಡಿದ ಹರಸಿ ಹೋಗುತ್ತಾರೆ.

.    .    .

Discus